
ಅಮ್ಮುಣಿನ ಆಸೆ ಕೇಳಿ ನಡು ಇರ್ಲ್ ಲಿ ಸೋಂಕಿದಾಗೆ ಹೆದ್ರಿ ಬೆಗ್ರ್ ಬಿಚ್ಚಿ ಹೋದವು ಅತ್ತೆ ತಂಗಮಕ್ಕ. “ಅಲ್ಲನೇ ಅಮ್ಮುಣಿ… ತವ್ರು ಮನೆಂದ ಕೊತ್ತಿ ತಾಕೆ ಬೊತ್ತೂತ ನಿಂಗೆ ಗೊತ್ಲೆನಾ?? ಚಾಮುಣ್ಯತ್ತಿಗೆ ಕುಸಾಲ್ ಗೆ ಏನೋ ಹೇಳಿರುವೋ… ಅದರ್ನೇ ನೀ ಸತ್ಯತ ನಂಬುದಾ… ಅದ್ಕೇ ಪಂಡ್ ನವು ಹೈದಂಗಳಿಗೆ ಹೇಳ್ದ್ ಅತ್ತೆ ಮನೆ ಕೊತ್ತಿ ಅಂಡಲ್ಸ್ ದೂಂತ!!” ಹೇಳ್ದವು ತಿರ್ಗಿಸಾ ನೋಡದೆ ಹಟ್ಟಿ ಕಡೆ ಹೋದೊ. ಆದರೂ ನಂಗೊಂದು ಸಂಸಯ ಮಾರ್ರೆ… ‘ತವ್ರು ಮನೆಂದ ಕೊತ್ತಿ ಯಾಕೆ ತಾಕೆ ಬೊತ್ತ್?? ತಂದರೆ ಏನಾದೆ?ʼ ನಂಗನ್ಸಿದೆ… ಅತ್ತೆ ಮೇಲೆನ ಸಿಟ್ಟ್ ಕೊತ್ತಿ ಮೇಲೆಲ್ಲಾ… ಹಂಗೆ ಅತ್ತೆಕ ಎಲ್ಯಾರ್ ಬೊಯ್ದರೆ ಸಿಟ್ಟ್ ಲಿ ಗಂಡನ ಮನೆ ಕೊತ್ತಿಗೆ ಚಳ್ಕೆಲಿ ಎರ್ಡ್ ಬೀಸಕ್. ಆದರೆ ತವ್ರು ಮನೆ ಕೊತ್ತಿ ಆದರೆ ಹಂಗೆ ಬೀಸಿಕಾದ್ಲೆಲ್ಲಾ!! ಯಾಗೋಳು ಮೋಕೆ ಜಾಸ್ತಿ… ಅದ್ಕೆ ಹಳ್ಳಿಯವರ ನಂಬಿಕೆ “ತವ್ರು ಮನೆಂದ ಕೊತ್ತಿ ತಾಕೆ ಬೊತ್ತ್!!” ಆದರೆ ಇನ್ನೂ ಅಡಿಕಂತಿ ನೋಡ್ರೆ ಪುಚ್ಚೆ ಕಲ್ಲುರ್ಟಿ ಗಡ!! ಪದೆಲ ಉಸತ್ತೆ ಹೇಳ್ದೊ…ನಾ ಅಲ್ಲತನೂ ಹೇಳುದ್ಲೆ.. ಏಕೆ ಗೊತ್ತುಟಾ? ಕಲ್ಲುರ್ಟಿ ದೆವ್ವ ಹೊರ್ಡ್ ಕಾಕನ ಪಾಡ್ದನಲಿ ಹೇಳ್ದೆ “ಒಂಜಿ ಬಾಗಿಲ್ಡ್ ಬನ್ನಗ ಕರಿ ಪೆರ್ಗೆ ಆತ್ ಬರ್ಪೆ… ಒಂಜಿ ಬಾಗಿಲ್ಡ್ ಬನ್ನಗ ಕರಿ ಪುಚ್ಚೆ ಆದ್ ಬರ್ಪೆ!!” ಆದರೂ ಇಂದ್ ನವ್ಕೆ ಮಾತ್ರ ಅದೊಂದು ಕ್ರಮತ ಅಷ್ಟೇ ಆಗಿ ಹೋಗುಟು ಅಷ್ಟೇ… ಯಾಕೆ ಎಂತಕೆತ ಗೊತ್ಲೆ. ನೆಂಟ್ರ್ ಗ ಬಂದರೆ ನೀರ್ ಚೊಂಬು ತಾಕೆ ಮನೆ ಯಜಮಾಂತಿ ಓಡ್ದೆ. ಹೋದ ಹೆಂಗ್ ಸ್ ʼನೀರ್ ಕೊಡುವ ಕ್ರಮ ಒಂದು ಉಟ್ಟಲ್ಲಾʼತ ಹೇಳಿಕಂಡೇ ಬಂದರೆ, ಬಂದ ನೆಂಟ ನೀರ್ ಚೊಂಬುಗೆ ಕೊಡಿ ಬೆರ್ಳ್ ಕಂತ್ ಸಿ ತೆಗ್ದದೆ. ಇನ್ನೂ ಕೆಲವು ಚೊಂಬುನ ಮುಟ್ಟಿ ಕೈ ಮುಕ್ಕಂಡವೆ!! ( ಕಾಸಿಂದ ಬಂದ ಗಂಗಾ ಜಲ ನೋಡಿ!!) ಅದರ್ಲೂ ಚೊಂಬುನ ಆಕಾರ ವಿಕಾರದ ಬಗ್ಗೆ ಹೇಳ್ದು ಬೇಡ ಕಂಡದೆ. ಹೋಗಲಿ ನೀರ್ ಚೊಂಬ್ ತಾದೆಂತಕೆ ಗೊತ್ತುಟಾ?? ಊರೂರು ಸುತ್ತಿ ಬಂದ ನೆಂಟ ನೀರ್ ಚೊಂಬುನ ತಕಂಡ್ ಜಾಲ್ ಕರೆಗೆ ಹೋಗಿ ಅದರ್ಲಿ ಮೋರೆ ತೊಳ್ದ್ ಒಳ್ದ ನೀರ್ ಲಿ ಕಾಲ್ ನೂ ತೊಳ್ಕಂಡ್ ಮನೆ ಮೆಟ್ಲ್ ಹತ್ತೊಕು… (ಹಂಗಿರ್ಕಾಕನ ನೀರ್ ಚೊಂಬು ಎಷ್ಟ್ ದೊಡ್ದದ್ ಬೇಕಾದು…ನೀವೇ ನೆನ್ಸಿ). ಆದರೆ ಅಂದ್ ನೀರ್ ಚೊಂಬ್ ಕೊಡ್ತಿದ್ದದ್ ಎಂತಕೆತ ಇಂದ್ ನವ್ಕೆ ತಿಳ್ಸಿಕೆ ಮಾತ್ರ ಕೊರೋನಾನೇ ಬರಕಾತ್.. ಎಂತ ಮಾಡ್ದು ಹೇಳಿ … ಕಲಿಕಾಲ ಅಣ್ಣಾ ಕಲಿಕಾಲ… ಎಲ್ಲಾ ಕಾಲ ಮೈಮೆ ….
ಒಂದ್ ಕಡೆ ಹೆಣ್ಣ್ ನ ಮೇಲೆ ಮೋಕೆ (ಮೊದ್ವೆ ಆಗಿ ವರ್ಸ ಕಳ್ತ್ ಲೆ ನೋಡಿ!!) ಇನ್ನೊಂದ್ ಕಡೆ ಹಿರಿಯವ್ ಹೇಳ್ದ ಆಚಾರ, ಇಚಾರಗಳ ಮೀರ್ದು ಹೆಂಗೆತ ಚಿಂತೆ. ಅರ್ಜುನಗಾಂದಾಂಗೆ ಯುದ್ಧ ಮಾಡೊಕಾ? ಅಲ್ಲಾ ಬುಟ್ಟ್ ಪದ್ರಡ್ ಹಾಕೊಕಾ? ಇಂತಾ ಒಂದ್ ಸಂದಿಗ್ಧ ಸಮಸ್ಯೆಲಿ ಪಾಂಬ್ ತಿದ್ದ ಪಾಚುಗೆ ಆಪದ್ಭಾಂದವ ಶ್ರೀಕೃಷ್ಣ ನಾಂಗೆ ನೆಂಪಾದೇ ಬಾವ ಪುತ್ತು. ತಡ್ತ್ ಲೆ… ಫೋನ್ ಮಾಡಿಯೇ ಬುಟ್ಟತ್… ಮಾತಾಡಿ ಕಡೆಕಡೆಗೆ ಅಳ್ಗೆಲೇ ಬಾತ್… ಹೆಣ್ಣ್ ಗೆ ಬೇಜಾರಾದೆತ!!! ಇಂಥದಿಕೆಲ್ಲಾ ಮುಟ್ಟಿ ಮಾಡ್ದರ್ಲಿ ಪುತ್ತು ಎತ್ತಿದ ಕೈ…. ಟ್ಯೂಬುಂದ ಹೊರಗೆ ಬಂದ ಪೇಸ್ಟ್ ನ ಬೇಕರೂ ಪುನಃ ಟ್ಯೂಬುಗೆ ತುಂಬುಸಿ ಕೊಡ್ದು… (ಟ್ಯೂಬುನ ಕುಂಡೆ ಕೊಯ್ದ್ , ಹೊರಗೆ ಬಂದ ಪೇಸ್ಟ್ ನ ಒಳಗೆ ತುಂಬುಸಿ ಕಿಚ್ಚಿಗಿಡ್ದ್ ಕೊಯ್ದ ಭಾಗನ ಅಂಟ್ ಸಿರೆ ಆತಲ್ಲಾ?? ಅಂಥಾ ಸಕಲಕಲಾವಲ್ಲಭ!! ) “ಅಲ್ಲಯಾ ಪಾಚು… ಇಷ್ಟ್ ಸಣ್ಣ ವಿಸಯಕ್ಕೆ ನೀ ತಲೆ ಬಿಸಿ ಮಾಡ್ದೆಂತಕೆ… ಇಂದಾ… ಎಲ್ಲದಿಕ್ಕೂ ಒಂದು ಪರಿಹಾರ ಉಟ್ಟು… ಅಷ್ಟಕ್ಕೂಇದೇನ್ ನಮ್ಮ ಸುಳ್ಯದ ಕರೆಂಟ್ ನ ಕತೆನಾ?? ಪರಿಹಾರನೇ ಇಲ್ಲೆಂತೇಃಳಿಕೆ!! ಬುಡ್… ಪಂಡ್ ನವೆಲ್ಲಾ ನಮ್ಮ ಒಳ್ಳದಿಕ್ಕೆ ಮಾಡ್ದ ಶಾಸ್ತ್ರಗೆಲ್ಲಾ ಇಂದ್ ಅನುಕೂಲ ಶಾಸ್ತ್ರ ಆಗುಟು… ತುಪ್ಪದ ಕ್ರಮ ಮೊದ್ವೆ ಹಾಲ್ ಲೇ ಮುಗ್ದಾಂಗೆ!!! ಈಗ ತವ್ರು ಮನೆಂದ ಕೊತ್ತಿ ತಾಕೆ ಬೊತ್ತ್ … ಅಷ್ಟೇ ಅಲ್ಲ?? ಬೇಡ… ನೀ ಸೀದ ತಕಂಡ್ ಬಂದ್ ನಮ್ಮಲ್ಲಿ ಬುಡು…. ಒಂದ್ ಎರ್ಡ್ ವಾರ ನಮ್ಮಲ್ಲಿರ್ಲಿ…. ಮತ್ತೆ ತಕಂಡ್ ಹೋಗ್… ಆಗ ನಮ್ಮ ಮನೆಂದ ತಕಂಡ್ ಹೋದಾಂಗೆ ಆತಲ್ಲಾ?? “ ಕೇಳ್ದ ಪಾಚುನ ಮೋರೆ ಸುರೂನ ಮಳೆನ ಗುಡ್ಗ್ ಸಿಡ್ಲ್ ಗೆದ್ದ ಹೆರ್ಗ್ ಲ್ ಅಳ್ಂಬುನಾಂಗೆ ಅರ್ಳಿತ್. ದಿನ ಕಳ್ದಾಂಗೆ ಕೊತ್ತಿ ಮೊರಿ ಏನೋ ದೊಡ್ಡದಾತ್, ಹಾಲ್ ಕಮ್ಮಿ ಮಾಡಿ ಗಂಜಿನೂ ತಿಂಬಕೆ ಸುರು ಮಾಡ್ತ್. ಆದರೆ ತಾದು ಹೆಂಗೆ? ಎಲ್ಲಾ ಕಡೆ ಲಾಕ್ ಡೌನ್ !! ಕಡೆಗೆ ಹಳೇ ನೆಂಟ ಪೋಲೀಸ್ ಚಿನ್ನಪ್ಪಣ್ಣಂಗೆ ದಮ್ಮಯ ಹಾಕಿ ಬೈಕ್ ಲಿ ಹೋಗಿ ನಡು ಮಧ್ಯಾಹ್ನ ದಾಟಿಕೆ ಮುಂದೆ ಬಂದ್ ಮನೆಗೆತ್ತಿದೊ. ತಂದ ತಂಗೀಸ್ ಚೀಲಲೇ ಆ ಕೊತ್ತಿ ಮೊರಿ ಉಚ್ಚೆ ಹೊಯಿಕಂಡುಟೋ ಏನೋ? ಚೀಲಂದ ನೀರ್ ಹನ್ ಕುದರ ನೋಡಿ “ಎಂತಯಾ ಪಾಚು… ನಿನ್ನ ಅತ್ತೆಮನೆ ಕೊತ್ತಿ ಬಾಕನನೇ ಒಟ್ಟೆ ಆಗುಟು ಕಂಡದೆ”ತ ಪುತ್ತುನ ಅಯ್ಯೆ ಬೇಬ್ಯಕ್ಕಂಗೆ ಹೇಳಿಯೇ ಹೋತ್.
ಕೊತ್ತಿ ಏನೋ ಬಂದೆತ್ತಿತ್… ಆದರೆ ಮೊರಿ ಕೊತ್ತಿಗೆ ಹಾಲ್ ಬೇಕಲ್ಲಾ? ಯಾಗೋಳು ಅದೇ ಅಭ್ಯಾಸ ಆಗಿತ್ತ್ ನೋಡಿ. ಕೇರೆ ಹಾವ್ಗೆ ದನ ಹೊಡಿವ ಮಕ್ಕಳ ನೋಡ್ಕಾಕನ ಬೆನ್ನ್ ತೊರ್ಸುದುಗಡ!!! ಹಂಗೇ ಈ ಕೊತ್ತಿನೂ ಇಸಿದ ಪಾತ್ರನ ಕಂಕಣಿ ಮಣ್ಕಣಿ ಮಾಡಿ ಪಾತ್ರಕೆ ಹಾಕಿದರ ನೆಲಕ್ಕೆ ಬೀಳ್ಸಿ ತಿಂಬೊತಿತ್ತ್.. ಕಾರಣ ಹಾಲ್ ಇಲ್ಲೆ!! ಬೇಬ್ಯಕ್ಕಂಗೋ ಆ ಕೊತ್ತಿ ಗಂಜಿ ಹಾಳ್ ಮಾಡ್ದರ ನೋಡ್ರೆ ಎಲ್ಲಿಲ್ಲಾದ ಪಿಸ್ರ್ ಹತ್ತಿದೆ. ಪುತ್ತುನ ಮನೆನ ಕೆಂಪಿ ಹಸ್ ಕೈದಾಗುಟು…ಹಾಲ್ ಇಲ್ಲೆ. ಸರಿ ಪಾಚುಗೊಂದು ಹೊಸಾ ದಿನಚರಿ ಸುರಾತ್.. ಬೊಳ್ಪುಗೆ ಎರ್ಡ್ ಕೊಂಡೆ ಹಾಲ್ ಕೊಟ್ಟ್ ಬರೊಕು ಕೊತ್ತಿನ ಚಾಕ್ರಿಗೆ. ಬಂದ್ ದ್ ಅಮ್ಮುಣಿಗೆ ತವ್ರ್ ಮನೆ ಕೊತ್ತಿನ ವರದಿ ವಾಚನನೂ ಆಕು. ಕೊತ್ತಿನ ಬಣ್ಣ, ಹಣೆಲಿ ಕಪ್ಪು ನಾಮ, ಬೀಲ ಕೊಡಿ ಬಿಳಿ, ಮೊಂಡ್ ಕೆಬಿ ಇದರೆಲ್ಲಾ ಪ್ರತೀದಿನ ಕೇಳಿ ತಿಳ್ಕಂಡರೇ ಅಮ್ಮುಣಿಗೆ ಸಮಾಧಾನ. ದಿನಾ ದಿನಾ ಅದೇ ಕೆಬಿ ಅದೇ ಬೀಲನ ಕೇಳ್ರೂ ಬಿಡ್ತ್ಂತಾಕಿಲೆ ಅದ್ಕೆ. ಅದ್ ಗಂಜಿ ತಿಂತಾ , ಕತ್ತಲೆಗೆ ನಿಲ್ಗಿತಾ, ನಿನ್ನೆ ಹಾಲ್ ಕುಡ್ದುಟುಗಡನಾ… ಹೊತ್ತೊತ್ತುಗೆ ನೆಂಪುಸಿ ನೆಂಪುಸಿ ಕೇಳ್ರೂ ಮುಗ್ಯಕಿಲೆ. ಹಿಂಗೇ ದಿನ ಮೂರ್ ಕಳ್ತ್. ಈ ಮುದ್ದಣ -ಮನೋರಮೆಯರ ಸರಸ ಸಲ್ಲಾಪದಾಂಗೆ ಪಾಚು- ಅಮ್ಮುಣಿನ ಕೊತ್ತಿ ಕತೆ ಕೇಳಿ ಕೇಳಿ ತಂಗಮ್ಮಕ್ಕಂಗೂ ಆಸೆ ಹುಟ್ಟಿತ್ ಒಮ್ಮೆ ಆ ಕೊತ್ತಿನ ನೋಡೊಕುತ. ತಡ್ತ್ ಲೆ..ಹಾಲ್ ಕೊಡಿಕೆ ಹೋವ ಪಾಚುನೊಟ್ಟಿಗೆ ಹೋದೊ ಸೀದ ಪುತ್ತುನಲ್ಲಿಗೆ. ಬೊಳ್ಪುನ ಚಾಯಕ್ಕೇ ಅತ್ತಿಗೆ ತಂಗಮಕ್ಕ ಬಂದದ್ ಬೇಬ್ಯಕ್ಕಂಗೂ ಕುಸಿನೇ… ಬೊಡ್ರೊಟ್ಟಿಗೆ ಚಿಬೆರಿ ಹಾಕಿದ ಒಣ್ಂಗಿಲ್ ಮೀನ್ ನಂಙ್ ಗೈಪು ಕೊಟ್ಟೊ. ‘ಚಾಯ ಇಸಿ ಬನ್ನೆ' ತೇಳಿ ಹೋಗಿ ಬಂದವೇ “ಅತ್ತಿಗೇ… ನೋಡ್ದರಿ ಅಲ್ಲಾ.. ಕೊತ್ತಿ ಮೊರಿ ಮಾತ್ರ ಬಾರೀ ಲಾಯ್ಕುಟ್ಟು ನೋಡಿಕೆ. ಆದರೆ ಅದ್ ಆಡುವ ಆಟಗಳ ನೋಡ್ರೆ ಅದ್ ಕೊತ್ತಿ ಮೊರಿ ಅಲ್ಲಾ… ಕೊತ್ತಿ ಮಾರಿ!! ಮೊನ್ನೆ ಹನೀಸ್ ಮಳೆ ಹನ್ ಕಿತ್ತ್ ನೋಡಿ.. ಜಾಲ್ ಕರೆ ಕಪ್ಪೆಗ ಬಂದಿರೊಕು.. ಅದರ್ಲಿ ಎರ್ಡ್ ಕಪ್ಪೆ ದೇವ್ರ ಕೋಣೆ ಬಾಗಿಲ್ ಗೆ ತಂದ್ ಹಾಕಿಟು. ಇನ್ನ್ ಎಂತೆಲ್ಲಾ ಹೊರಗೆಂದ ತಿಂದದೆನಾ? ದೇವ್ರುಗೇ ಗೊತ್ತು… ಲಾಯ್ಕ್ ಒಗ್ದ್ ಆ ಸಣ್ಣ ಕಂಬಿ ಸೀರೆನ ಒಗ್ದ್ ಒಣ್ಗ್
ಸಿ ಅಲ್ಲಿ ಮೊಡ್ಚಿಸಿದ್ದೆ. ನೋಡ್ರೆ ಹೋಗಿ ಅದರ್ಲಿ ಉಚ್ಚೆ ಹೊಯ್ದುಟುಯಾ. ಎಲ್ಯಾರ್ ಉಟ್ಟ್ ಕಂಡೋಗಿದ್ದರೆ ಆ ಜಲಜ ರೆಡೀ ಇದ್ದಿರ್ದು “ ದಾನೆ ಬೇಬ್ಯಕ್ಕ… ಲಂಗಡ್ ಪಡ್ಕೆ ಮೈತೋಂನ್ಯೆರಾ!!” ತ ಕೇಳಿಕೆ. ನಿನ್ನೆ ಅಷ್ಟ್ ಲಾಯ್ಕ್ ನ ಬಂಗ್ ಡೆ ಸಾರ್ ಮಾಡಿ ಒಲೆ ಚಿಂಟೆಲಿ ಇಸಿದ್ದೆ … ಹೋದೇ ಅಳೆಗೆನನೇ ನೂಕ್ಯಾಕಿಟು… ಎಲ್ಯಾರ್ ಚೂರ್ ಅತ್ತ ಇತ್ತ ಆಗಿದ್ದರೆ ಅದೇ ಗೈಪಾಗಿದ್ದಿರ್ದು.. ನೀವ್ಗೆ ಒಣ್ಂಗಿಲ್ ಮೀನ್ ಗೈಪು ಸಿಕ್ಕಿಕೆ ಅದೇ ಕಾರಣ… ಅಲ್ಲಾ ಮೂರ್ ದಿನಲೇ ನಂಗಿಷ್ಟ್ ಬಿಡ್ಸಿದರ ನೀವ್ ಇನ್ನೆಂಗೆ ಪಾಳ್ಸುವರಿಯೋ!!” ತ ಏನೋ ಕರ್ರ್ಂಚಿದಾಂಗಾಗಿ ಒಳಗೆ ಹೋದೊ..ನೋಡ್ರೆ ಚಾಯ ಕೊದ್ದ್ ಪಾಟೆಲಿ ಇರ್ದು ಬುಟ್ಟು ಸ್ಟೌಲ್ಯುಟ್ಟು!! ಹೊರಗೆಂದ ಇದರ ಕೇಳ್ದ ಪಾಚು ಅಮ್ಮುಣಿನ ಹೆಂಗೆ ಸಮಾಧಾನ ಮಾಡ್ದೂಂತ ತಲೆ ಕೆರ್ಕಂಡಿದ್ದರೆ, ಇಂಥಾ ಕೊತ್ತಿನ ಯಾರಿಗೆ ದಾಟ್ಸುದೂತ ಲೆಕ್ಕ ಹಾಕ್ಯಂಡ್ ತಂಗಮ್ಮಕ್ಕ ಬೊಡ್ರೊಟ್ಟಿಲಿ ಬಾಳ್ಲೆ ಕೊಡಿಲಿದ್ದ ಸಾರ್ ನ ಚೀಂಟಿಕಂಡೊ. ಇನ್ನ್.. ನೀವ್ಗ್ಯಾರಿಗಾರ್ ಆ ಕೊತ್ತಿನ ತಕಂಬಕೆ ಮನ್ಸುಟ್ಟುತಿದ್ದರೆ ಹೇಳಿ… ಪಾಚುಗೆ ಹೇಳಿ
ನೀವ್ಗೆ ಎತ್ಸಿಕೆ ಏನಾರ್ ವ್ಯವಸ್ಥೆ ಮಾಡೊನೊ…
✍ ಡಾ. ಪುನೀತ್ ರಾಘವೇಂದ್ರ ಕುಂಟುಕಾಡು
Arebhashe Articles of Gowdas
(ಚಿತ್ರಕೃಪೆ : ಲೋಹಿತ್ ಹೊದ್ದೆಟ್ಟಿ)
Nicely written 👌
ReplyDelete