google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): 2021

https://arebhasheminpuli.blogspot.com/2017/08/blog-post_11.html

Tuesday 9 February 2021

ಕುಂಞಿ ಬಾವನ ಕುಪ್ಪಿ ಲೋಟೆ…



    ಮೊನ್ಸ ಆಗಿ ಹುಟ್ಟಿದವಂಗೆ ಸಣ್ಣಿತರ್ಂದಲೇ ಒಂದ್ ನಮೂನೆನ ಆಸೆಗ ಇದ್ದವೆ, ದೊಡ್ಡಿತಾದ ಮೇಲೆ ಹಾಂಗೆ ಮಾಡೊಕುಹೀಂಗೆ ಮಾಡೊಕುತ. ಬೇಕರೆ ಅಂಗನವಾಡಿಲಿ ಹೊಡಿ ಪುಳ್ಳರ ಕೇಳಿ ನೋಡ್ಯೊಮ್ಮೆ..‌ ‘ನೀ‌ ದೊಡ್ಡಿತಾದ ಮೇಲೆ ಎಂತ ಮಾಡಿಯನೆ'…. ಬಗೆ ಬಗೆ ಉತ್ತರಗ ಸಿಕ್ಕುವೊಡಾಕ್'ಟ್ರ್, ಇಂಜಿನೀರ್, ಮಾಸ್ಟ್ರ್, ಕ್ರಿಕೆಟರ್ ಅಷ್ಟ್ ಮಾತ್ರನಾ ಜೆಸಿಬಿ ಬುಡಂವ ಆಕೂಂತ ಕನ್ಸ್ ಕಾಂಬವೂ ಒಳೊ. ಆದರೂ ನಾ ತೋಟಕೆ ನೀರ್ ಬುಡುವ ಕೃಷಿಕ ಆಕುಗದ್ದೆ ಬೇಸಾಯ ಮಾಡೊಕುತ ಹೇಳಂವ ಒಬ್ಬನೂ ಇರಿಕಿಲೆ.‌ಹಂಗೇತ ಇದ್ ಅವರ ತಪ್ಪೂ ಅಲ್ಲ.. ಆಸ್ಪತ್ರೆಲಿ ಕಣ್ಣ್ ಬುಡ್ಕಾಕನನೇ ಕೈಲಿ ಮೊಬೈಲ್ ಉಟ್ಟು..  ಗದ್ದೆಗ ಎಲ್ಲಾ ತೋಟಗ ಆಗೊಳೊ…‌ ಕಂಡೇ ಗೊತ್ತಿಲ್ಲದವಂಗೆ ಆಸೆ ಹುಟ್ಟುದು ಹೆಂಗೆ?? ಎಲ್ಲಾ ಕಾಲ ಮೈಮೆ!! ಬುಡಿ…. ಹಿಂಗೇ ಸಣ್ಣಿತರ್ಂದಲೇ ಒಂದ್ ಲಾಯ್ಕ್' ಜಬರ್ದಸ್ತ್ ಆಸೆ ಕೊಡಿಮುಟ್ಟ ಇತ್ತ್ ನಮ್ಮ ಕುಂಞಿ ಬಾವಂಗೆಎಂತತೇಳ್ರೆ ಕುಪ್ಪಿ ಲೋಟೆಲಿ ಕುಡ್ಯೊಕುತ!! ಎಂತರ ಕುಡ್ಯೊಕು?? ಒಳದ್ ಅಲ್ಲಿ ನೋಡಿ.. ಅಜ್ಜಪಂದರ್ ಕೊಡಿ ಬೆರ್ಳ್ ಹಿಡ್ದ್ ನೋಡಿ ಕುಡಿತಿದ್ದ ಬಣ್ಣ ಇಲ್ಲದ ನೀರ್ ಮಂಗುರ್ಣಿತ ನೆನ್ಸ್'ಬಡಿನಮ್ಮ ಕುಂಞಿ ಬಾವಂಗೆ ಇದ್ದದ್ ಒಂದೇ ಒಂದ್ ಆಸೆ..  ಬೇಗ ದೊಡ್ಡಿತಾಗಿ ಕುಪ್ಪಿ ಲೋಟೆಲೊಮ್ಮೆ ಚಾಯ ಕುಡ್ಯೊಕುತ!!

             ಕುಪ್ಪಿ ಲೋಟೆಲಿ ಚಾಯ ಕುಡಿದುತೇಳ್ರೆ ಒಂದ್ ಮೊರ್ಯಾದೆನ ಪ್ರಶ್ನೆ, ದೊಡ್ಡವ್ಕೆ ಮಾತ್ರ ಹಕ್ಕ್ ಒಳದ್' ತಿಳ್ಕಂಡಂವ ಕುಂಞಿ. ಕಾರಣ ಸುಮಾರ್ ಉದ್ದ ಉಟ್ಟುನೋಡಗುಡ್ಡು ಮಾಡಿ ಹೇಳ್ನೆ..‌ ಒಂದಿನ ನಮ್ಮ ಚಿನ್ನ ಮಾವಅದೇ ಕುಂಞಿ ಬಾವನ‌‌ ಅಪ್ಪ…‌ಮತ್ತೆ ಅವರ ಬಾವ ಕೇಪಣ್ಣ ಚಿಕ್ಕನೂ ಕೂಡಿಕಂಡ್ ಬಂದಡ್ಕ ದಾಟಿದ್ ಸುಮಾರ್ ಅತ್ತ ಕಾಞಂಗಾಡ್ ಮುಟ್ಟ ಹೋಗಿದ್ದೊ. ಇಂದ್' ಮಕ್ಕಳಾಂಗೆ ಮೊಬೈಲ್ ಇಲ್ಲದವಾದರ್ಂದ ಕುಂಞಿನೂ ನಾನೂ‌ ಬನ್ನೆತ ಹೊರ್ಟತ್.‌ ದೂರ ಉಟ್ಟು ಮಂಙಬಿಸ್'ಲ್ ಕಾರತೇಳ್ರೂ ಎಲ್ಲಿ ಕೇಳ್ದೆ. ಇತ್ತ ಅಯ್ಯೆದೂ ಆತ್ ಒಮ್ಮೆ ಕರ್ಕಂಡೋಗಿ‌ ಮಾರ್ರೆ ..‌ಹೆಂಗೂ‌ ಸಾಲೆಣ್ಣ ಉಟ್ಟಲ್ಲಾ..‌ರಗಳೆ ಇಲ್ಲೆಲ್ಲಾ!! (ಕಾರಣ ಒಂದಿನಾರ್ ನಾ ಒರ್ಕೆಲಿ‌ ಇರ್ವೆತ ಅಯ್ಯೆನ ಆಲೋಚನೆ ಅಷ್ಟೇ) ಇನ್ನ್ ಸಿಪಾರಸ್ಸ್ ಸಿಕ್ಕಿದ ಮೇಲೆ ಕೇಳೊಕಾ..‌ಹಂಗೇ ಹೊರ್ಟವು ದಾರಿಲಿ ಒಂದ್ ತಟ್ಟಿಕಡ ಅಂಗ್'ಡಿಲಿ ಚಾಯ ಕುಡ್ಯೊನೊತ ನಿಲ್ಸಿದೊ. ಕುಂಞಿ ಹೈದಂಗೆ ಕಲ್ತಪ್ಪ ಇರ್ಲಿತ ಹೇಳ್ದ ಚಿನ್ನ ಮಾವ ಚಾಯ‌ ಮಾತ್ರ ಸ್ಟೀಲ್ ಲೋಟೆಲಿ ಕೊಡಿತೇಳ್ದೊ. ಕೇಳ್ದ ಹೈದನ ರಂಪಾಟಕ್ಕೆ ತಟ್ಟಿಕಡ ನೆಲಮಟ್ಟ ಆಗದ್ದ್ ಪುಣ್ಯ. ಕಡೆಗೆ ಕೇಪಣ್ಣ ಚಿಕ್ಕ ಅವರ ಕೈಲಿದ್ದ ಕುಪ್ಪಿ ಲೋಟೆನನೇ ಕೊಟ್ಟೊ. ಹೈದಂಗೆ ಕೈ ಜಾರದಾಂಗೆ ಹಿಡ್ಕಂಡ್ ಕುಡ್ಯಕಾದೆನಾ?? ಮಿಳ್ಳಿಗೆ ಬೊಗ್ಗುಸಿಕಾದೆನಾ?? ಅಪ್ಪ ಚಾಯ ಬೊಗ್ಗುಸಿದಾಂಗೆ ಬೊಗ್ಗುಸಿದರ್ಲಿ ಚಾಯದೊಟ್ಟೊಗೆ ಕುಪ್ಪಿ ಲೋಟೆನೂ ನೆಲಸೇರ್ತ್!! ಕಡೆಗೆ ಚಿನ್ನ ಮಾವ ಮೋರೆ ಬಾಪುಸಿಕಂಡ್ ಕುಡ್ದ ಚಾಯ, ತಿಂದ ಕಲ್ತಪ್ಪಕೆ ದುಡ್ಡ್ ಕೊಟ್ಟೊ…. ನೆಲ ಸೇರ್ದ ಕುಪ್ಪಿ ಲೋಟೆಗೂ ಸೇರ್ಸಿದ್!!!

             ಅಲ್ಲಿಂದ ಮೇಲೆ ಹೈದನ ಮನ್ಸ್ ಇನ್ನೂ‌ ಗಟ್ಟಿ ಆಕಂಡೇ ಹೋತ್. ಹೆಂಗಾರ್ ಸರಿ….ಬೇಗ ದೊಡ್ದಿತಾಕು‌ಕುಪ್ಪಿ ಲೋಟೆಲಿ ಹನೀಸೂ ಸೂಸದಾಂಗೆ ಚಾಯ ಕುಡ್ದೇ ಕುಡ್ಯೊಕುತ!! ನಿನ್ನೆ ಇದ್ದಾಂಗೆ ಇಂದುಟ್ಟಾ?? ಇಂದ್'ನಾಂಗೆ ನಾಳೆ‌ಇರ್ದೊ?? ಹಂಗೇ‌‌ ದಿನ ಕಳ್ದಾಂಗೆ ನಮ್ಮ ಕುಂಞಿ ಬಾವನೂ ದೊಡ್ಡಿತಾತ್…‌ ಸಾಲೆ ಕಲ್ತ್ ಒಳ್ಳ ಚಾಕ್ರಿನೂ ಹಿಡ್ತ್.. ಆದರೆ ಪ್ರಾಯ‌ ನಿತ್ತದೆನಾದಿನಕ್ಕೆ‌ ಮೂರಲ್ಲ ಆರ್ ಕಡೆಂದತೇಳ್ವಾಂಗೆ ಸಮ್ಮಂದಗಳೂ ಕೇಳಿಕಂಡ್ ಬಂದೊ. ಬಂದದೆಲ್ಲಾ ಕೂಡಿ ಬಂದದೆನಾ??!! ಬೊಳಿ ಕೂಡ್ರೆ ಗಣ ಕೂಟ ಕೂಡುದ್ಲೆ. ಗಣ ಕೂಟ ಕೂಡ್ರೆ ಜಾತಕ ಕೂಡುದ್ಲೆ. ಎಲ್ಲಾ ಕೂಡಿ ಬಾತ್'ತ ಹೋಗಿ‌ ನೋಡ್ರೆ ಗೂಡೆ ಉದ್ದ-ಗುಡ್ಡು!! ಆದರೂ ಕಡೆಗೆ ದೇವ್ರ ಹರ್ಕೆ ಪಲಕ್ಕೆ ದೂರದ ಕಾಟೂರು ಕಡೆಂದ ನೋಡ್ದ ಸಮ್ಮಂದ ಒಂದು‌ ಆದುತಾತ್ಗೂಡೆನೂ ಲಾಯ್ಕ್‌ ಕಂಡದೆ..‌ಒಳ್ಳ ಕೆಲ್ಸಗಾರ್ತಿ..‌ಓದಿಟುತ ಗೂಡೆ‌ ಮನೆಗೆ ಹೋಗಿ ಎತ್ತಿದೊ ಕುಂಞಿನ ಮನೆವು. ಬಂದ ನೆಂಟ್ರ್'ಗಳಿಗೆಲ್ಲಾ ನೀರ್ ಚೊಂಬ್ ಆದರ ಸ್ವಾಗತ ಎಲ್ಲಾ‌ ಆಗಿ ಚಾಯ ತಕಂಡ್ ಬಾತ್ ಹೊಸ ಗೂಡೆ.  ಕುಪ್ಪಿ ಲೋಟೆಲಿ ಬಂದ ಚಾಯನ ಕಣ್ಣರ್ಲ್'ಸಿ ನೋಡ್ದ ಕುಂಞಿ ಹೈದ ತಲೆ ಎತ್ತಿ ಗೂಡೆನ  ಮೋರೆ ನೋಡ್ದೂ ಅದ್ ಇವನ ನೋಡ್ರೆ….‌ಒಮ್ಮೆಗೆ ಕೈಲಿದ್ದ ಕುಪ್ಪಿ ಲೋಟೆ ಕೈಂದ ಜಾರ್ದಾಂಗೆ ನೆಲಸೇರಿಕೆ‌ ಮೊದ್ಲ್ ಅಂವನ ಕೈನನೂ ಪ್ಯಾಂಟ್'ನನೂ ಆದರ್ಸಿಕಂಡತ್!! ಇಷ್ಟೆಲ್ಲಾ ಆಕೆ ಕಾರಣ ಅಂದ್ ಪಂಜಿಪಳ್ಳಕೆ ಅವ್ಲಾಕಿಕೆ ಹೋಗಿ, ಅಲ್ಲಿಂದ‌ ಬಾಕನ ಬೈಕ್' ಟಯರ್ ಪಂಚರಾಗದಾಂಗೆ  ಪಾಸಾಣಮೂರ್ತಿಕೆ ಹರ್ಕೆ ಹೊತ್ತ್ ಬಸ್ಟೇಂಡ್ ಗೆತ್ತ್'ಸಿದ ಗೂಡೆನೇ ಇದ್!!ಪೊಟೊಲಿ‌ ನೋಡ್ದ್ ಲಾಕ್'ಡೌನ್'ಗೆ ಮೊದ್ಲ್ .. ಕೋಲಂತ್ರಿ!! ಹಂಗಾಗಿ ಗೊತ್ತಾಗದ್ಅಂತೂ ಹರ್ಕೆ ಇಸಿಕಂಡ ದೆವ್ವಗಳ್ಂದಾಗಿ  ಜಾರ್ದ ಕುಪ್ಪಿ ಲೋಟೆ ಸರ್ತಿ ನೆಲ ಸೇರ್ತ್ಲೆಕುಂಞಿ ಬಾವನ ಮೊರ್ಯಾದೆ ಒಳ್ಸಿತ್..  ಮುಂದೊರ್ಸಿಕೆ ಹಿರ್ಯವು ದಿನ ನೋಡ್ತೊಳೊಗಡ….

 

ಬರ್ದವು :  ಡಾ. ಪುನೀತ್ ರಾಘವೇಂದ್ರ ಕುಂಟುಕಾಡು