google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): April 2018

https://arebhasheminpuli.blogspot.com/2017/08/blog-post_11.html

Thursday 12 April 2018

ಬೊಚ್ಚಿ ಹೋದ ದೆವ್ವ!!


                     ಹೊಸಾ ಐನ್ ಮನೆ ಮುಂದೆ ಜಾಲ್ ಲಿ ಸೇರ್ದ ಕುಟುಂಬದವ್ಕೆ ಅಂದ್ ಏನೋ ಕುಸಿ!! ಪಂಡ್ ಕಾಲಲಿ ಪಾಲ್ ಪತ್ತಂಡೆ ಆಗಿ, ಎಲ್ಯೆಲ್ಲೋ ಹೋಗಿ ಒಕ್ಕ್ ಲ್ ಕುದ್ದಿದ್ದ ಹಿಂಕ್ ಲ್ ಗೆಲ್ಲಾ  ಇಂದ್ ಮಕ್ಕ,ಮೊರಿ ಸಮೇತ ವಾಪಸ್ ಬಂದ್  ಸೇರ್ಯೊಳೊ. ಕಾರಣ ಕುಟುಂಬದ "ಧರ್ಮನಡಾವಳಿ". ಹೆಚ್ಚ್ ಕಮ್ಮಿ ಹಕ್ಕಲ್ಯಕ್ಕಲೆ 50 ವರ್ಷನೇ ಕಳ್ದಿರ್ದು ದೆವ್ವಂಗಳಿಗೆ ಕೋಲ ಕೊಟ್ಟ್. ಒರ್ ಮಾಡ್ ಲಿದ್ದ ದೆವ್ವಂಗಳ ಚಾವಡಿ ಒರ್ದ ಬಿದ್ದ ಮೇಲೆ ಸುರ್ಗೆ, ಮಣಿಗಂಟೆ ಎಲ್ಲಾ ಹುತ್ತ ಕೂಡಿ ಮೊಣ್ಣಡಿಗಾತ್. ಮನೆಯವೂ ಊರ್ ಬುಟ್ಟವೂ ದೆವ್ವಂಗಳ್ನೂ ಮರ್ತೊ. ಹಂಗೆತ ಮಾಯೆಗ ಬುಡುವೊನ??!! ಹೋದಲ್ಲಿ, ಬಂದಲ್ಲಿ ಎಲ್ಲಾ ಒಟ್ಟಿಗೇ ಇರವು!! ಎಡಗಾಲು ಎಡವದಂತೆ, ಮುಡಿದ ಹೂ ಬಾಡದಂತೆ ಕಾಪಾಡಿಕಂಡಿರವಲ್ಲನ?? ಅವೇ ಮಾಯೆಗಳೂ ಸತ್ಯತೆ ತೋರ್ಸಿಕೆ ಸುರುಮಾಡ್ದೊ.. ಈಚೆ ಮನೆಯವನ ಕೋಳಿ ಕಾಣೆ. ಆಚೆವನ ಹೂಡುವ ಕಡ್ಪದ ಹೋರಿ ಕಾಣೆ. ಮತ್ತೊಬ್ಬಂದಂತೂ ಕಟ್ಟಿಕಂಡ ಗೂಡೆನೇ ಕಾಣೆ!! ಮೊದ್ವೆ ಆಗದೆ ಕುದ್ದ ಮನೆ ಮಕ್ಕ ಅದೆಷ್ಟೋ!! ಆಗ ನೆನ್ಪಾದೇ ದೆವ್ವಗಳ ; ಅವ್ಗಳ ಎದ್ರ್ ಸದೆ ಉಪದ್ರಗಳಿಗೆ ನಿಮೂರ್ತಿ ಇಲ್ಲೆ!!!

                    ಹಿಂಗೇ ಬುಟ್ಟರೆ ಸಂತಾನ ಅಳ್ದ್ ಹೋದುತ ಹೆದ್ರಿದ ಕುಟುಂಬದ ಮೂತರ್ ಮತ್ತೆ ಹಿರಿತಲೆಗೆಲ್ಲಾ ಸೇರಿ, ಕಾಡ್ ಲಿ ನೆರೆ ಗೆಡ್ಡೆ ಹುಡ್ಕಿದಾಂಗೆ ಹುಡ್ಕಿ ಹುಡ್ಕಿ ಕೇರಳಂದ ಒಬ್ಬ ಜೋಯಿಸನ ಕರ್ಸಿ ಅಷ್ಟಮಂಗಲಲಿ ಸ್ವರ್ಣ ಬುಡ್ಸಿ ನೋಡೊನೋತಾತ್. ಆದರೂ ಕುಟುಂಬದವ್ಕೆಲ್ಲಾ ಸರಿ ಆದೋ?? ಅಂವ ಹೇಳ್ದ್ ಇವಂಗಾಕಿಲೆ. ಇಂವ ಹೇಳ್ದೆಲ್ಲಾ ಅವ್ಕೇ ತಪ್ಪೇ!! ನಾ ಹೇಳ್ದ ಜೋಯಿಸನೇ ಆಕುತ ಒಬ್ಬ ಹೇಳ್ರೆ.. ನಾವ್ ಅಂದಾಜ್ ಮಾಡ್ದ ಜಾಗೆಲೇ ಸ್ಥಾನ ಕಟ್ಟಿರೆ ಒಳ್ಳದ್ ಇನ್ನೊಬ್ಬ. ಕುಟುಂಬ ಜಗಳ ಕೋಮಣ ಜಿಡ್ಡ್ ಎಲ್ಯಾರ್ ಬುಟ್ಟ್ ಹೋದೋ?? ಎಲ್ಲಿ ಹೋದರೂ ಮುಡಿಗೆ ಮೂರ್ ಸೇರ್ ಯಾಗೋಳು ಜಳ್ಳೇ!! ಏನೆಲ್ಲಾ ಉರ್ಡಪತ್ತ ಆಗಿ ಕಡೆಗೂ ಒಂದ್ ಲಾಯ್ಕ್ ಐನ್ ಮನೆ, ದೆವ್ವದ ಚಾವಡಿಗ ಎದ್ದ್ ನಿತ್ತೊ. ಕೊಕ್ಕೆ ಹಾಕವು ಇನ್ನೂ ಹಾಕ್ಯಂಡೇ ಒಳೊ. ಎಂತ ಮಾಡ್ದು. ಕಾಯರ ಗುತ್ತಿಗೆ ಕಡೆಕೊಡಿ ಇಲ್ಲೆಲ್ಲಾ?? ಹಿಂಗೆಲ್ಲಾ ಇರ್ಕಾಕನ ಹೊಸ ಐನ್ ಮನೆ ಒಕ್ಕ್ ಲ್ ಗೆ ಸೇರ್ದ ಕುಟುಂಬದವ್ಕೆಲ್ಲಾ ಏನೋ ಕುಸಿ ಆದರೆ  ಮನೆ ಮಕ್ಕಳಿಗೆಲ್ಲಾ ದೆವ್ವ ನೋಡಿಕೆ ಜಾಲ್ ಲಿ ಸೊಕ್ಕುದೇ ಹಬ್ಬ. ಕೊಟ್ಟ ಹೆಣ್ಣ್ ಮಕ್ಕ ತಂದ ಎಣ್ಣೆಲಿ ಕೊಳಗನೇ ಎರ್ಕಿ ಸೂಸಿಟು. ಮೂಲೆಲಿ ಕುದ್ದ ಅಜ್ಜಿಕಗಳೆಲ್ಲಾ ಪಂಡ್ ಲಿ ದೆವ್ವ ನಡಿತಿದ್ದದರ ಹೇಳಿಕಂಡ್ ಚಪ್ಪ್ ತೊಳೊ!!

                    ಹರ್ಸಯ ಕಳ್ದ್, ಕೆಂಚಿರಾಯನ ಪೂಜೆನೂ ಮುಗ್ದಾಂಗೆ ಎಲ್ಲವೂ ಭಂಡಾರ ತೆಗ್ಯಕೆ ಹೊರ್ಟೊ. ಮೊಗ, ಮೂರ್ತಿ ಹಿಡ್ದವರ ದರ್ಸನ, ದರ್ಪುದರ ನೋಡಿಕೇ ಪೊರ್ಲು. ಅಷ್ಟೊತ್ತಿಗೆ ಸೇರ್ದ ಜನರ  ನಡೂಂದ ಕೇಳ್ದ ಆರ್ಭಟೆಗೆ ಮೊಡ್ಯಾಳನ ಕೈಂದ ಚೊಂಬ್ ರೆಟ್ಟಿ ಬೀಳದ್ ಪುಣ್ಯ!! ನೋಡ್ರೆ ಗುಡ್ಡೆಕೊಡಿ ತ್ಯಾಂಪಣ್ಣಜ್ಜ ಪುರ್ಸೋತಿಲ್ಲದೆ ದರ್ಪುತೊಳೊ. ಹಾರಿಕಂಡ್ ಹಾರಿಕಂಡ್ ಭಂಡಾರದವ್ರ ಎದ್ರೇ ಬಂದ್ ಎತ್ತಿದೊ. ಮೊಡ್ಯಾಳ ಎಷ್ಟ್ ಸರ್ತಿ ನೀರ್ ಕೊಡ್ಕಿರೂ ನಿಲ್ಲ್ ತನೇ ಇಲ್ಲೆ. ಕಡೆಗೆ ಮೂತರೇ ಬಂದ್  "ಯಾರ್  ನೀ?" ಕೇಳ್ದಕ್ಕೆ ಬಂದ ಉತ್ತರ "ನಾ ಮಾಯೆ.. ನಾ ಮಾಯೆ!!". ಅದರ ಕೇಳಿ ಕೈಲಿ ಬೆತ್ತ ಹಿಡ್ಕಂಡಿದ್ದ ಪೂಜಾರಿ ಒಬ್ಬ ಅವರ ಬೆನ್ನ್ ಗೆ ರಪ್ಪತ ಬೀಸಿದೇ 'ಕುದ್ರಲ್ಲಿ' ಕಣ್ಣ್ ಹೊಣ್ಕ್ ಸಿತ್. ತ್ಯಾಂಪಣ್ಣ ಮರಂದ ಜಾರ್ದ ಕಕ್ಕೆ ಕೊಡ್ಪಿದ ಕರ್ಗೆಲ್ ಬಪ್ಪಂಗಾಯಿನಾಂಗೆ ಹಿಂದೆ ಹೋಗಿ ಗೋಡೆಗೊರ್ಗಿ ಕುದ್ದೇ ಹೋದೊ. ಆದರೂ ದರ್ಪುದು, ಕಣ್ಣರ್ಳುಸುದು ನಿತ್ತತ್ಲೆ. ಅಂತೂ ಭಂಡಾರ ತೆಗ್ದ್, ಕೋಲ ಕಳ್ದ್ ನೆಂಟ್ರ್ ಗೆಲ್ಲಾ ಅವರವರ ಮನೆಗೆ ಎತ್ತಿದೊ. ಇಲ್ಲಿ ಕುದ್ದ ತ್ಯಾಂಪಣ್ಣ ಮಾತ್ರ ಒಂದ್ ಹನೀಸೂ ಮೊಸ್ಗಿತ್ಲೆ. ಕಣ್ಣ್ ಮಾತ್ರ ಹಂಗೇ ಪಿಳಿಪಿಳಿ ಮಾಡ್ತೊಳೊ. ಕಡೆಗೆ ಮೂತರೇ ಹೋಗಿ "ಯಾರ್  ನೀ?" ಗಡ್ಸ್ ಲಿ ಕೇಳ್ದೊ. "ನಾ.. ತ್ಯಾಂಪಣ್ಣ... ಗುಡ್ಡೆಕೊಡಿ ತ್ಯಾಂಪಣ್ಣ!!" ಎಲ್ಲವು ಅಡ್ಡಡ್ಡಾ ಬಿದ್ದ್  ನೆಗಾಡ್ರೆ, ಬೊಳ್ಪೂಂದಿತ್ತ ಚುರ್ಕರ ಕುದ್ದ್, ಚಿನ್ನೆರ್ಪಿ ಮರಗಟ್ಟಿಹೋದ ಕಾಲ್   ಬುಡ್ಸಿಕಾಗದೆ ತ್ಯಾಂಪಣ್ಣ ತಬ್ಬುರ್ಸುತುಟ್ಟು. ಕಡೆಗೆ ನಾಕ್ ಹೈದಂಗ ಬಂದ್, ಎತ್ತಿಕಂಡ್ ಹೋಗಿ, ಕಾಲ್ ಗಳ ನೀಂಡ್ಸಿ ಬೆರ್ಚಪ್ಪನಾಂಗೆ ಜಾಲ್ ಕರೆಲಿ ನಿಲ್ಸಿದೊ!!!

(ಕಥೆ ಹೇಳ್ದವು: ದೇವರಮನೆ ಶ್ರೀ ಬೆಳಿಯಪ್ಪ ಗೌಡ, ಪೂರ್ಲಪ್ಪಾಡಿ)
(ಬೊಚ್ಚಿ ಹೋದ ದೆವ್ವ!! : An Arebhashe Articles of Gowdas)


  • ಡಾ. ಪುನೀತ್ ರಾಘವೇಂದ್ರ ಕುಂಟುಕಾಡು